ನಾಡಿನ ಒಳ್ಳೆಯತನ…

ನಮ್ಮೂರಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಹಿಂದೂಗಳ ಒಂದು ಸಮಾಜದವರು ತಮ್ಮ ಮನೆದೇವ್ರುಪೂಜೆ ಮಾಡುತ್ತಿದ್ದಾರೆಪ್ರತಿಯೊಬ್ಬರ ಮನೆಯಲ್ಲಿ ಎರಡು ಬ್ಯಾಟಿ ಬೀಳುತ್ತವೆಮನೆಗೆ ಬರುವ ಬಂಧುಗಳಿಗೆಊಟಕ್ಕೆ ಬರಿ ಅನ್ನ ಇದ್ದರೆ ನಡೆಯಲ್ಲಅದರ ಜೊತೆಗೆ ರೊಟ್ಟಿನೂ ಇರಬೇಕುನಾವು ಹಳ್ಳಿ ಜನ ಎರಡುರೊಟ್ಟಿ ತಿಂದರೆನೇ ಹೊಟ್ಟೆ ತುಂಬೋದು.

ಮನೆಯಲ್ಲಿರುವ ಜನರಿಗೆಬಂದಿರುವ ಸಂಬಂಧಿಕರಿಗೆ ಊಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರೊಟ್ಟಿಗಳುಬೇಕು.ನೂರಾರು ರೊಟ್ಟಿ ತಯಾರಿಸಲು ಒಂದು ಕುಟುಂಬ ದವರಿಗೆ ಕಷ್ಟದ ಕೆಲಸಅದಕ್ಕೆ ಓಣಿಯಜನರಿಗೆ ರೊಟ್ಟಿ ಮಾಡಿಕೊಡಲು ಸಜ್ಜೆಅಥವಾ ಜೋಳದ ಹಿಟ್ಟು ನೀಡುತ್ತಾರೆಒಂದೊಂದು ಮನೆಗೂ ಹಿಟ್ಟುನೀಡುತ್ತಾರೆಇಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ ಭಾವ ಇರಲ್ಲ

ನಮ್ಮ ಮನೆಗೂ ಒಂದು ಹಿಂದೂ ಕುಟುಂಬದವರು ಸಜ್ಜೆ ಹಿಟ್ಟು ನೀಡಿದ್ದರುರೊಟ್ಟಿ ಮಾಡಿ ಕೊಡಲಾಗಿದೆಕೆಳಗಡೆ ಚಿತ್ರದಲ್ಲಿ ಪುಟ್ಟಿಯಲ್ಲಿ ಒಂದು ರೊಟ್ಟಿ ಕಾಣಿಸುತ್ತಿದೆ ನೋಡಿಅದ್ಯಾಕೆ ಅಂದರೆಯಾರ ಮನೆಯವರುರೊಟ್ಟಿ ಮಾಡಿ ಕೊಡುತ್ತಾರೋ ಅವರ ಮನೆಗೆ ಪುಟ್ಟಿ ವಾಪಾಸ್ ಕಳಿಸುವಾಗ ಅದರಲ್ಲಿ ಒಂದು ರೊಟ್ಟಿ ಇಟ್ಟುಕೊಡುತ್ತಾರೆ

ನಮ್ಮ ಕಲ್ಯಾಣ ಕರ್ನಾಟಕದ ಹಳ್ಳಿಗಳಿಗೆ “ಧರ್ಮ ಭೂತ ಇನ್ನೂ ಹೊಕ್ಕಿಲ್ಲ.ಎನ್ನುವುದಕ್ಕೆ ಇಂತಹ ನೂರುಉದಾಹರಣೆಗಳನ್ನು  ನೀಡಬಲ್ಲೆ..!

article courtesy: from Mahammad Sahukar’s Facebook wall.

ದಾಖಲೆ ಸಮಯದಲ್ಲಿ ಆಸ್ಪತ್ರೆ

ಕೊರೊನ ರೋಗಿಗಳಿಗಾಗಿ ೧೦೦೦ ಹಾಸಿಗೆಗಳ ಆಸ್ಪತ್ರೆ ಚೀನಾ ಕಟ್ಟಿದ್ದು ಕೇವಲ ೧೦ ದಿನಗಳಲ್ಲಿ.

ಈ ಮೊದಲು ೨೦೦೩ ರಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಸಾರ್ಸ್ ಗಾಗಿ ಕಟ್ಟಿದ ಆಸ್ಪತ್ರೆಗೆ ಬೇಕಾದದ್ದು ಕೇವಲ ಏಳು ದಿನಗಳು.

ಪ್ರೀಫ್ಯಾಬ್ ಸಾಮಗ್ರಿಗಳನ್ನು ಉಪಯೋಗಿಸಿದ ಚೀನಾ ದೇಶದೆಲ್ಲೆಗಳಿಂದ ಇಂಜಿನಿಯರುಗಳನ್ನ ತಂದು ದಾಖಲೆ ಸಮಯದಲ್ಲಿ ಆಸ್ಪತ್ರೆ ನಿರ್ಮಿಸಿತು.

ಚೀನಾ ಎಂದ ಕೂಡಲೇ ಮೂಗೆಳೆಯುವ ನಮಗೆ ಅವರ ಕಾರ್ಯ ಕ್ಷಮತೆಯನ್ನು ಅನುಕರಿಸುವ ಮನೋಭಾವ ಮತ್ತು ಉತ್ಸಾಹ ಬರಬೇಕು.

#ಮನೋಭಾವ #ಉತ್ಸಾಹ #ಕ್ಷಮತೆ #ಕೊರೊನ

ಕೊರೊನಾ ವೈರಸ್

“2019-nCoV” ಅಥವಾ ಕೊರೊನಾ ವೈರಸ್. ಚೀನಾ ದೇಶವನ್ನು ಕಂಗೆಡಿಸಿದ ಈ ಮಾರಣಾಂತಿಕ ರೋಗಕ್ಕೆ, ಮದ್ದಿಲ್ಲ, ಚಿಕಿತ್ಸೆಯಿಲ್ಲ, ನೂರಾರು ಜನ ಬಲಿ. ಇದರ ರೋಗ ಲಕ್ಷಣ ಉಸಿರಾಟದಲ್ಲಿ ತೊಂದರೆ, ಜ್ವರ ಇತ್ಯಾದಿ. ಕೆಲವೊಮ್ಮೆ ಯಾವುದೇ ಲಕ್ಷಣಗಳೂ ಗೋಚರವಾಗುವುದಿಲ್ಲ. ಹಾಗಾಗಿ ಇದು ಡಬಲ್ ಡೆಡ್ಲಿ.

ಹಲವು ದೇಶಗಳಿಗೆ ಹರಡುತ್ತಿರುವ ಈ ಖಾಯಿಲೆಗೆ ಮದ್ದನ್ನು ಕಂಡು ಹಿಡಿಯಲು ಔಷಧ ಕಂಪೆನಿಗಳು ಹಗಲಿರುಳು ಶ್ರಮಿಸುತ್ತಿವೆ. ಪರಸ್ಪರ ಭೇಟಿಯಾಗಲು ಜನ ಅಂಜುತ್ತಿದ್ದಾರೆ. ಸೋಂಕು ಹರಡದಿರಲು ಚೀನಾದ ಒಂದು ನಗರವನ್ನೇ ಸಂಪೂರ್ಣವಾಗಿ ಹೊರಗಿನ ಸಂಪರ್ಕದಿಂದ ನಿಷೇಧಿಸಲಾಗಿದೆ. ವಿಮಾನ ಯಾನ ಸ್ಥಗಿತ. ಹೊರಗಿನವರು ಬರುವ ಹಾಗಿಲ್ಲ, ಒಳಗಿನವರು ಹೊರ ಹೋಗುವ ಹಾಗಿಲ್ಲ.  

ಹತ್ತು ಲಕ್ಷ ಜನಸಂಖ್ಯೆಯುಳ್ಳ ನಗರವಾದ ವುಹಾ (Wuhan), ಚೈನಾದ ಹುಬೆ ಪ್ರಾಂತ್ಯದ ರಾಜಧಾನಿ. ಇಲ್ಲಿಂದ ಶುರುವಾಗಿದ್ದು ಕೊರೊನಾ ಪಿಡುಗು.

ಶೀಘ್ರದಲ್ಲೇ ಈ ಸೋಂಕಿಗೆ ಮದ್ದನ್ನು ಕಂಡು ಹಿಡಿಯಲೆಂದು ಹಾರೈಸುತ್ತಾ….   

#ಕೊರೊನಾ #ವೈರಸ್ #ಹುಬೆ #ಜ್ವರ#ಪಿಡುಗು #ಚೈನಾ 

ಅಕ್ಕಮಹಾದೇವಿ

ಬೆಟ್ಟದ ಮೇಲೊಂದು ಮನೆಯ ಮಾಡಿ,

ಮೃಗಂಗಳಿಗಂಜಿದೊಡೆಂತಯ್ಯ?  

ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದೊಡೆಂತಯ್ಯ?

ಸಂತೆಯೊಳಗೊಂದು ಮನೆಯ ಮಾಡಿ,

ಶಬ್ದಕ್ಕೆ ನಾಚಿದೊಡೆಂತಯ್ಯ?

ಚೆನ್ನಮಲ್ಲಿಕಾಜುನದೇವ ಕೇಳಯ್ಯ

ಲೋಕದೊಳಗೆ ಹುಟ್ಟಿದ ಬಳಿಕ, ಸ್ತುತಿ-ನಿಂದೆಗಳು ಬಂದರೆ

ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು

#ಅಕ್ಕಮಹಾದೇವಿ.

#ವಚನ

ಪದ್ಮಶ್ರೀ

ಸಮುದಾಯಗಳ ಮಧ್ಯೆ ರೋಷ, ದ್ವೇಷ, ಹಗೆ, ಹಿಂಸೆ ಗೆ ಪ್ರಚೋದನೆ ನೀಡುವ ಪಶುಗಳ ಮಧ್ಯೆ ದೈತ್ಯಾಕಾರವಾಗಿ ನಿಲ್ಲುವ “ಅಕ್ಷರ ಸಂತ“ ಬಿರುದಾಂಕಿತ, ಕಿತ್ತಳೆ ಮಾರಿ ಹೊಟ್ಟೆ ಹೊರೆದುಕೊಳ್ಳುವ, “ಹರೇಕಳ ಹಾಜಬ್ಬ”……

ಈಗ “ಪದ್ಮ ಶ್ರೀ” ಪುರಸ್ಕೃತ.

#ಸಮುದಾಯ #ರೋಷ, #ದ್ವೇಷ #ಹಗೆ #ಹಿಂಸೆ #ಪ್ರಚೋದನೆ

New Zealand ಹತ್ಯೆ

New Zealand ದಲ್ಲಿ ೪೯ ಜನರ ಹತ್ಯೆ ಮಾಡಿದ ಭಯೋತ್ಪಾದಕನ ಪರವಾಗಿ ಮಾತನಾಡಿದ ಅಲ್ಲಿನ ಸಂಸತ್ ಸದಸ್ಯನ ತಲೆ ಮೇಲೆ ಮೊಟ್ಟೆ ಒಡೆದು ಪ್ರತಿಭಟಿಸಿದ ೧೭ ರ ಯುವಕ. ಮತಾಂಧತೆ ಯನ್ನ ಈ ರೀತಿ ಜನ ಎದುರಿಸಿ ಪ್ರತಿಭಟಿಸಿದಾಗ ದ್ವೇಷದ ರಾಜಕಾರಣ ಅಂತ್ಯ ಕಾಣುತ್ತೆ. ಶುಭ ರಾತ್ರಿ.

#NewZealand #Christchurch #Mosque

ಮುಯ್ಯಿಗೆ ಮುಯ್ಯಿ…

ಮುಯ್ಯಿಗೆ ಮುಯ್ಯಿ… ಪಾಕ್ನಂಥ ದೇಶಗಳಿಗೆ ಅರ್ಥವಾಗೋ ಭಾಷೆ ಇದೇ. ಪುಲ್ವಾಮಾ ಕ್ರೌರ್ಯಕ್ಕೆ ಆಗಸದಿಂದ ಬಂದೆರಗಿತು ಆಪತ್ತು, ಸೇಡು. ವಾಯುಸೇನೆಯ ಅದ್ಭುತ ಸಾಹಸಕ್ಕೆ ದೇಶ ಮಾತ್ರವಲ್ಲ ಇಡೀ ವಿಶ್ವವೇ ಭೇಶ್ಎಂದು ಹೊಗಳಿತು.

ಜೈ ಹೋ!!!

#ಭಾರತ #ಪಾಕಿಸ್ತಾನ #ವಾಯುಸೇನೆ #IAF #ಪುಲ್ವಾಮಾ #ಕಾಶ್ಮೀರ

ನಿಮ್ಮಜ್ಜಿ ನಿಮ್ಗ್ ಹೇಳ್ಕೊಟ್ಟ ಪಾಠ ಏನು?

ನಿಮ್ಮಜ್ಜಿ ನಿಮ್ಗ್ ಹೇಳ್ಕೊಟ್ಟ ಪಾಠ ಏನು?

ಮೂರೂ ಬಿಟ್ಟೋರು ಊರಿಗ್ ದೊಡ್ಡೋರು, ಅಂಥವರ ಬಗ್ಗೆ ತಲೆ ಕೆಡುಸ್ಕೊಳ್ಬೇಡ …”

ಇದು ನನ್ನಜ್ಜಿ ನನಿಗ್ ಹೇಳ್ಕೊಟ್ಟ ಪಾಠ.

#ಅಜ್ಜಿ #ಪಾಠ #ಕನ್ನಡ #ನೀತಿ #ಅನುಭವ

ಬೀದಿ ಫುಟ್ ಬಾಲ್

ನನ್ನ ಫ್ಲಾಟ್ ನ ಹತ್ತಿರ ಐದಾರು ಸೌದಿ ಹುಡುಗರು ಬೀದಿ ಫುಟ್ ಬಾಲ್ ಆಡುತ್ತಿದ್ದರು. ಆಟದ ಮಧ್ಯೆ ಸುಮಾರು ೧೦-೧೨ ವರ್ಷ ಪ್ರಾಯದ ಹುಡುಗ ಅಲ್ಲೇ ಪಕ್ಕದಲ್ಲಿ ಊರುಗೋಲಿನೊಂದಿಗೆ ನಿಂತಿದ್ದ ವ್ಯಕ್ತಿಯ ಹತ್ತಿರ ಹೋಗಿ ಆತನ ಕಾಲಿಗೆ ಹೇಗೆ ಏಟಾಯಿತು ಎಂದು ಅನುಕಂಪದಿಂದ ವಿಚಾರಿಸಿ, ಆತನಿಗೆ ಹಸ್ತ ಲಾಘವ ನೀಡಿ ಮರಳಿದ ತನ್ನ ಆಟ ಮುಂದುವರೆಸಲು.

�ಬದುಕಿನ ನಾಗಾಲೋಟದಲ್ಲಿ ನಮಗೆ ಇಂಥ ದಯೆ ತೋರಿಸಲು ಸಮಯ ಸಿಗೋಲ್ಲ, ಅಥವಾ ಅದರ ಕಡೆ ನಾವು ಗಮನ ಹರಿಸೋಲ್ಲ. ಈ ಪುಟ್ಟ ಹುಡುಗ ಒಂದು ಸುಂದರ ಪಾಠ ನನಗೆ ನೀಡಿದ. ಎಲ್ಲೆಲ್ಲೂ ಹಿಂಸೆ, ಅಸಹನೆ, ಹಗೆ, ಧ್ವೇಷ, ಅವುಗಳ ಮಧ್ಯೆ ಇಂಥ ಅವಿಸ್ಮರಣೀಯ ದೃಶ್ಯ.

ಅರಬ್ ಅಥವಾ ಅರಬೇತರ, ಮಾನವೀಯತೆ ಮಾತ್ರ ನಿರಂತರ, ಅಲ್ವಾ?

#ಅರಬ್ #ದಯೆ #ಅನುಕಂಪ #ಸೌದಿ

ಹೊಡಿಯೋ ಗಂಡನಿಗೆ ಪ್ರೀತಿ ಜಾಸ್ತಿ ಅಂತೆ

ಹೊಡಿಯೋ ಗಂಡನಿಗೆ ಪ್ರೀತಿ ಜಾಸ್ತಿ ಅಂತೆ. ನಮ್ಮಲ್ಲಿ ಮಾತ್ರ ಅಲ್ಲ, ರಶ್ಯಾದಲ್ಲೂ ಇದೇ ನಂಬಿಕೆ.

ರಷ್ಯಾದಲ್ಲಿ, ಹಿಂಸೆಗೆ ತಿರುಗುವ ಗೃಹ ಕಲಹಕ್ಕೆ ಶಿಕ್ಷೆ ಕಡಿಮೆ ಮಾಡುವ ಬಗೆಗಿನ ಕಾಯಿದೆಗೆ ಅಧ್ಯಕ್ಷ ಪ್ಯೂಟಿನ್ ಸಹಿ ಹಾಕಿದ್ದಾರೆ. ಅದರ ಬೆನ್ನಲ್ಲೇ ಅಲ್ಲಿನ ಪ್ರಸಿದ್ಧ ಪತ್ರಿಕೆಯೊಂದು ಗಂಡಂದಿರಿಂದ ಹೊಡೆತ ತಿನ್ನೋ ನಾರೀಮಣಿಗಳಿಗೆ ಮುತ್ತಿನ ಹಾರದಂಥ ಸಲಹೆಯನ್ನೂ ಕರುಣಿಸಿದೆ. ಅದೆಂದರೆ…

ಮಹಿಳೆಯರು ತಮ್ಮ ಮೈಮೇಲಿನ ಬರೆ, ಬಾಸುಂಡೆಗಳ ಬಗ್ಗೆ ಹೆಮ್ಮೆ ತಾಳಬೇಕಂತೆ. ಶಿವ ಸಿವಾ…ಎಲ್ಲಿಗ್ ಬಂದು ಮುಟ್ತಪ್ಪಾ ಈ ತಿಳಿಗೇಡಿತನ?

ತಡೀರಿ, ಇನ್ನಷ್ಟು ಕೋಸಂಬ್ರಿ ಬರ್ತಾ ಇದೆ…

ಅಲ್ಲಿನ ಖ್ಯಾತ ಸಮಾಜ ಶಾಸ್ತ್ರಜ್ಞ ಈ ಮುತ್ತನ್ನು ಉದುರಿಸಿದ, ಹೆಕ್ಕಿಕೊಳ್ರಪ್ಪಾ ಅಂತ. ಅದೇನೂಂದ್ರೆ….

ಹೊಡಿಯೋ ಬಡಿಯೋ ಗಂಡುಸ್ರು ಗಂಡು ಮಕ್ಳನ್ನೇ ಹುಟ್ಟುಸ್ತಾರಂತೆ.

ಅಲ್ಲಾ, ಇದೆಲ್ಲಾ ಓದಿದ್ ಮ್ಯಾಲೆ, ಒಂದ್ಸಲ ರಷ್ಯಾಗ್ ಹೋಗಿ ಹಣಕಿ ಹಾಕ್ ಬರೋಣ ಅಂತ ಅನ್ನುಸ್ತಾ ಇಲ್ವಾ?

ಈಗ ಮಲ್ಕಳಿ, ಬಾಸುಂಡೆ, ಬೋಂಡಾ ಎಲ್ಲಾ ಕನಸಲ್ಲಿ ಪಾರ್ಸಲ್ ಬರತ್ತೆ. ಗುಡ್ ನೈಟ್.